Sunday, November 21, 2010
ಸಂಬಂಧಕ್ಕೆ “ಸಹೋದರತೆ”ಯೇ ಬೆಸುಗೆ..............
ತಾಯಿ ವಾತ್ಸಲ್ಯಮಯಿ, ಎಲ್ಲರಿಗೂ ಗೊತ್ತು ತಾನೇ? ಆದರೆ ಒಂದು ಮಗುವಿಗೆ ತನ್ನ ಆಂತರಿಕ ತುಮುಲವನ್ನು ಆಕೆಯೊಂದಿಗೆ ಹೇಳಿಕೊಳ್ಳಲಾಗದ ಯಾವುದೋ ಭಾವ. ಬಹುಷಃ ಈ ಸಂದಿಗ್ದತೆ ಭ್ರಾತೃತ್ವದಲ್ಲಿ ಇಲ್ಲ ಎನ್ನುವುದು ನನ್ನ ಭಾವನೆ. ಎಲ್ಲಾ ತಡೆಗಳನ್ನು ಮೀರಿದ, ಏಕತೆಯ, ತಾದಾತ್ಮ್ಯತೆಯ ಭಾವ ಅಲ್ಲಿದೆ. ಸಂಕೋಚವನ್ನು ಮೀರಿದ, ಭೇದವನ್ನು ಮರೆತ, ಕನಸಿನ ಕಲ್ಪನೆಯ ಸಾಕಾರದ ಮೂಲ ಇರುವುದು ಈ ಸಹೋದರತೆಯಲ್ಲಿ.
ಸಹೋದರತೆಯ ಭಾವ ಯಾವ ಕ್ಷಣದಲ್ಲಿ ಸ್ಪುರಣವಾಗುತ್ತೋ ಗೊತ್ತಾಗೊದಿಲ್ಲ. ಜೀವನದ ಯಾವುದೋ ಹಂತದಲ್ಲಿ ಯಾರ ಯಾರೊಂದಿಗೋ ಸಂಪರ್ಕ ಆಗುತ್ತೆ, ಒಡನಾಟ ನಡೆಯುತ್ತೆ. ಯಾವುದೋ ಕ್ಷಣದಲ್ಲಿ ಯಾರನ್ನೋ ನೋಡಿ, ಅಯ್ಯೋ ನನಗೊಂದು ಇಂಥಾ ತಂಗಿ ಇದ್ದರೆ...... ಅಥವಾ ಒಬ್ಬ ತಮ್ಮ ಇದ್ದರೆ ಎಷ್ಟು ಚೆನ್ನಾಗಿತ್ತು ಅಂದುಕೊಳ್ತೀವಿ. ಸಾಮಿಪ್ಯ ಹಾಗೇ ಇದ್ದಲ್ಲಿ, ಆ ಸಂಬಂಧ ಘಟ್ಟಿಯಾಗತ್ತೆ, ಬಿಡಿಸಲಾಗದ ನಂಟಾಗುತ್ತೆ. ಇಲ್ಲದಿದ್ದಲ್ಲಿ ಮುಂದೊಂದು ದಿನ ಮರೆತೂ ಬಿಡಬಹುದು. ಹಾಗಾಗಿ ಸಂಬಂಧಗಳು ಹಸಿಯಾಗಿ, ಹಸನಾಗಿ ಇರಬೇಕಾದಲ್ಲಿ, ಬೇಕಾದದ್ದು ಅವಿರತ ಸಂಪರ್ಕ.
ಈಗ ನಾನು ಹೇಳೊಕೆ ಹೊರಟದ್ದು, ಎಲ್ಲಿ ಈ ಭಾವಗಳು ಇಂದಿನ ಜನಜೀವನದ ತಾಕಲಾಟದಿಂದ, ಕೌಟುಂಬಿಕ ವ್ಯವಸ್ಥೆಯ ಕಾರಣದಿಂದ ನಲುಗಿ ಹೋಗ್ತಾ ಇವೆಯಾ ಅನ್ನೋದು. ನನ್ನ ಅಭಿಪ್ರಾಯ ತಪ್ಪೇ ಇರಬಹುದು............ ತಪ್ಪಾದಲ್ಲಿ ಸರಿಪಡಿಸಿಕೊಳ್ತೀನಿ. ನಾನು ಹೇಳ್ತಿರೋದು ಬಹುತೇಕ ಇಂದಿನ ಜನಮಾನಸದಲ್ಲಿ ಕಾಣುತ್ತಿರುವ ವಿಚಾರವನ್ನು.
ಈಗ ನೀವೇ ಕಲ್ಪಿಸಿಕೊಳ್ಳಿ............ ನಿಮಗೊಬ್ಬಳು ಒಡಹುಟ್ಟಿದ ಅಥವಾ ಒಡನಾಡಿಯಾದ ತಂಗಿ ಇರಬಹುದು. ವಿವಾಹ ಪೂರ್ವದ ಜೀವನದ ನಿಮ್ಮ ಒಂಟಿತನದ ಕ್ಷಣಗಳಲ್ಲಿ ಆಕೆ ನಿಮ್ಮ ಕಣ್ಣೊರೆಸಿರಬಹುದು. ಆಮೇಲೆ ನಿಮ್ಮ ಮದುವೆಯಾಗತ್ತೆ ಮಕ್ಕಳಾಗ್ತಾರೆ........... ಅದೇ ರೀತಿ ಆಕೆಯದೂ ಕೂಡ. ನಿಮ್ಮ ನಿಮ್ಮ ಜಂಜಾಟದಲ್ಲಿ ನೀವು ಬಿದ್ದು ತೊಳಲಾಡ್ತಾ, ನಿಮ್ಮ ತಂಗಿಯ ಬಗ್ಗೆ ಇದ್ದ ಕಾಳಜಿ, ಅಥವಾ ನಿಮ್ಮ ಅಣ್ಣನ ಬಗ್ಗೆ ಇರುವ ಕಾಳಜಿ ಕಡಿಮೆ ಆಗಿದ್ಯಾ? ಪ್ರಾಮಾಣಿಕವಾಗಿ ಕೇಳಿಕೊಳ್ಳಿ. ಹಾಗಾದಲ್ಲಿ ಬಹುತೇಕ ಜನರ ಉತ್ತರ ಹೌದು ಅಂತಲೇ ಬರತ್ತೆ. ಹಾಗಾದರೆ ಹೀಗೇಕೆ ಅನ್ನೊ ಪ್ರಶ್ನೆ ನನ್ನನ್ನ ಕಾಡ್ತಾನೇ ಇದೆ. ಭ್ರಾತೃತ್ವ ಅನ್ನೋದು ನಮ್ಮ ಅತ್ಯುನ್ನತ, ಅವರ್ಣನೀಯ ನಂಬಂಧ. ಅದನ್ನು ಹಾಗೇಯೇ ಜತನದಿಂದ ಕಾಪಾಡಿಕೊಂಡು ಹೋಗಲು ನಮ್ಮಲ್ಲಿ ಸಮಯ ಇಲ್ವಾ? ಇದೆ ತಾನೇ? ಹಾಗಾದರೆ ಕೊಂಚವಾದರೂ ಅತ್ತ ಗಮನಿಸೋಣ ಅಲ್ವೆ....
Sunday, October 3, 2010
'ಕನಸು’ ನಮ್ಮ ಸಾಧನೆಗೆ ಪ್ರೇರಕ.
ನಾನು ಹಲವು ಸಾರಿ ಈ “ಕನಸು” ಎನ್ನುವ ಪದದ ಬಗ್ಗೆ, ಅದರ ಅರ್ಥ ವಿವರಣೆಯ ಬಗ್ಗೆ, ಅದರ ವ್ಯಾಪ್ತಿಯ ಬಗ್ಗೆ, ವಿಚಾರ ಮಾಡ್ತಾ ಇರ್ತೇನೆ. ಬಹುಷಃ ಕನಸೇ ಇಲ್ಲದಿದ್ದರೆ ಈ ಜಗತ್ತಿನ ಅತ್ಯದ್ಭುತ ವೈಜ್ನಾನಿಕ ಅನ್ವೇಷಣೆಗಳು ಇರುತ್ತಿರಲಿಲ್ಲ, ಈ ಜಗತ್ತಿನಲ್ಲಿ ಇಷ್ಟೆಲ್ಲಾ ವೈವಿದ್ಯತೆಗಳು ಇರುತ್ತಿರಲಿಲ್ಲ, ಹಾಗೆಯೇ ಬಹುಷ ನಮ್ಮ ಅಸ್ತಿತ್ವವೇ ಇರುತ್ತಿರಲಿಲ್ಲವೇನೊ....
ಹಾಗಾಗಿ ನಾವು ಈಗ ಮಾಡಬೇಕಾದದ್ದು, ನಮ್ಮ ಮಕ್ಕಳಿಗೆ ಕನಸು ಕಾಣಲು ಬಿಡುವುದು. ಅವರನ್ನು ಅವರಂತೆಯೇ ಇರಲು ಬಿಡುವುದು. ಒಂದು ಸಣ್ಣ ಎಳೆ ಚಿಗುರಿಗೂ ಕೂಡ ಒಂದು ಕನಸಿರುತ್ತದಂತೆ, ಅದೆಂದರೆ, ತಾನು ಚಿಗುರೊಡೆದು ಹೆಮ್ಮರವಾಗಿ ಬೆಳೆದು ಫಲ ಕಾಣಬೇಕೆನ್ನುವುದು. ಹಾಗಾಗಿ ಅದು ಚಿಗುರೊಡೆಯುವುದನ್ನು ನೀವು ತಪ್ಪಿಸೋದಕ್ಕಾಗಲ್ಲ, ನೀವು ಒಂದು ಕಡೆ ಚಿವುಟಿದರೆ ಅದು ಇನ್ನೊಂದೆಡೆ ಟಿಸಿಲೊಡೆಯುತ್ತದೆ. ಹಾಗಾಗಿ ನಮ್ಮ ಮಕ್ಕಳ ಬದುಕಿನಲ್ಲೂ ಒಂದು ರೀತಿಯ ಸಹಜತೆ ಇರಲಿ. ನಮ್ಮ ಅಹಮಿಕೆಯ ಉಗುರಿನಿಂದ ಅವರ ಕನಸಿನ ಚಿಗುರನ್ನು ಚಿವುಟುವುದು ಬೇಡ.
ಆದರೆ ನಮ್ಮ ಬಾದ್ಯತೆ ಇರುವುದು ಅವರಿಗೆ ಧನಾತ್ಮಕವಾಗಿ ಬೆಳೆಯುವ ಪರಿಸರ ನೀಡುವುದು. ಆದಷ್ಟು ಮಟ್ಟಿಗೆ ಹೊರಗಿನ ಪ್ರಾಣಿಗಳು ತಿನ್ನದಂತೆ ಗಿಡಗಳಿಗೆ ಟ್ರೀ ಗಾರ್ಡ್ ಇಡುತ್ತಾರಲ್ಲಾ.... ಹಾಗೆ. ನಾವು ನಮ್ಮ ಮಕ್ಕಳ ರಕ್ಷಕರಾಗಬಹುದು, ವಿನಃ, ಅವರ ಕನಸಿಗೆ ಭಂಗ ತರುವ ಯಾವ ಹಕ್ಕೂ ಕೂಡ ನಮಗಿಲ್ಲ.
Thursday, June 24, 2010
ಈ ಜಗತ್ತಿನಲ್ಲಿ ಇರೋದು ಎರಡು ಮಾತ್ರ.......ಧನ (+) ಇನ್ನೊಂದು, ಋಣ (-)
src="http://pagead2.googlesyndication.com/pagead/show_ads.js">
Tuesday, June 8, 2010
ಪ್ರಕೃತಿಯಲ್ಲಿರುವ ಸಹಜತೆ ನಮ್ಮಲ್ಲೇಕಿಲ್ಲ?
Wednesday, May 26, 2010
ವ್ಯವಸ್ಥೆಗಳೇಕೆ ಪತನಹೊಂದುತ್ತಿವೆ?
Tuesday, May 25, 2010
ಉಸ್ತಾದ್ ಹಮೀದ್ ಖಾನ್
ಶ್ರೀಯುತರು ನನ್ನ ಗುರುಗಳು ಅಂತ ಹೇಳೋದಕ್ಕೆ ನನಗೆ ತುಂಬಾಹೆಮ್ಮೆ. ಇಂತಹ ಖ್ಯಾತರನ್ನು ಅವರ ವಾದನ ಸುಧೆಯನ್ನು ಸವಿದದ್ದು ಯಲ್ಲಾಪುರದ ಜನತೆಯ ಭಾಗ್ಯ.Sunday, May 23, 2010
ವ್ಯವಸ್ಥೆಯ ಜೊತೆ ನಾವು
Friday, May 21, 2010
ಶಿಕ್ಷಣದ ಅರ್ಥ
Sunday, May 16, 2010
ನಮಗಾಗಿ, ನಮ್ಮೆಲ್ಲರಿಗಾಗಿ ಈ ಸಂವಿತ್
ನಾವೆಲ್ಲಾ ಹುಟ್ಟಿ, ಅಡಿಯಿಟ್ಟು, ಕಲಿತು, ಬೆಳೆದ ನಮ್ಮೆಲ್ಲರ ಈ ಯಲ್ಲಾಪುರ ಎಲ್ಲರಿಗೂ ಪ್ರೀತಿಯೇ ತಾನೇ? ನಾವು ಈಗ ಎಲ್ಲೇ ಇರಲಿ, ಯಾವ ಕ್ಷೇತ್ರದಲ್ಲೇ ಇರಲಿ, ನಮ್ಮೆಲ್ಲರನ್ನೂ ಭಾವನಾತ್ಮಕವಾಗಿ, ಬೆಸೆಯುವ ಶಕ್ತಿ, ಚೈತನ್ಯ ಈ ನೆಲದಲ್ಲಿದೆ. ನಾವೆಲ್ಲಾ ನಮ್ಮ ಊರಿಗೆ ಬಂದಾಗ, ಇಲ್ಲಿ ನಮ್ಮನ್ನು ಓಲೈಸುವವರಿದ್ದಾರೆ, ಮಾನಸಿಕವಾಗಿ ಬೆಂಬಲಿಸುವವರಿದ್ದಾರೆ. ಆ ಶಕ್ತಿಯೇ ನಮ್ಮೆಲ್ಲರನ್ನೂ ಮುನ್ನಡೆಸಿದೆ.
ಇಂತಹ ಸಾವಿರಾರು ಸಂಖ್ಯೆಯ ಯುವಕರ, ಹಿರಿಯರ ಒಂದು ದೊಡ್ಡ ಗುಂಪು ಯಲ್ಲಾಪುರದಿಂದ ದೂರದ ಊರುಗಳಲ್ಲಿ ನೆಲೆಸಿದೆ. ನಾವೆಲ್ಲಾ ಕಲಿತು ಬೆಳೆದ ನಮ್ಮ ಊರಿನ ಜನಗಳಿಗಾಗಿ ಏನನ್ನಾದರೂ ಮಾಡಬೇಕೆಂದು ಒಲವು ಹೊಂದಿರುವ ನಮ್ಮ ನಿಮ್ಮಂತಹ ಜನರಿದ್ದಾರೆ. ಇಂಥಹ ಜನಗಳ ಒಂದು ಭಾಗವಾದ ನನಗೆ ಬಂದಂತಹ ಯೋಚನೆಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುವ ಮನಸ್ಸು ಮಾಡುತ್ತಿದ್ದೇನೆ.
ಇಂದಿಗೆ ಸುಮಾರು ೨ ವರ್ಷಗಳ ಹಿಂದೆ ನಾನು ನಮ್ಮ ಭಾಗದ ಜನರ ಒಳಿತಿಗಾಗಿ ಒಂದು ಸಂಘಟನೆಯನ್ನು ಹುಟ್ಟುಹಾಕುವ ಮನಸ್ಸು ಮಾಡಿದೆ. ಆದರೆ ಅದಕ್ಕೆ ಬೇಕಾಗುವ ಪ್ರಮಾಣದ ಹಣಬಲ ನನ್ನ ಬಳಿ ಇರಲಿಲ್ಲ. ಆದರೆ ಮಾಡಬೇಕೆನ್ನುವ ಅದಮ್ಯ ಉತ್ಸಾಹ ಮಾತ್ರ ಇತ್ತು. ಇಂಥಹ ಸಮಾಜಹಿತ ಕಾರ್ಯಕ್ಕೆ ಹಣದ ಜೊತೆಗೆ ಜನರ ಬೆಂಬಲವೂ ಅವಶ್ಯವೇ ತಾನೇ? ಹಾಗಾಗಿ ಈ ಬಗ್ಗೆ ಬಹಳಷ್ಟು ಜನರ ಸಂಪರ್ಕ ಮಾಡಿದೆ. ನಾನು ಸಂಪರ್ಕಿಸಿದ ಎಲ್ಲರಿಂದಲೂ ಸಕಾರಾತ್ಮಕ ಉತ್ತರವೇನೂ ಬಂತು. ಆದರೆ ನನ್ನ ಸಂಕಲ್ಪ ಮಾತ್ರ ಯೋಚನೆಯ ಸ್ತರದಲ್ಲಿಯೇ ಉಳಿಯಿತು. ಆದರೆ ಕಳೆದ ಹಲವು ವರ್ಷಗಳಿಂದ ನಾನು ಬಡ ಪ್ರತಿಭಾವಂತ ಮಕ್ಕಳಿಗೆ ಸಹಾಯಧನ ಕೊಡುವದನ್ನು ಮುಂದುವರಿಸಿಕೊಂಡು ಬರುತ್ತಿದ್ದೆ. ಇಂತಹ ಅಲ್ಪಪ್ರಮಾಣದ ಸಹಾಯದಿಂದ ದೊಡ್ಡ ಸಾಧನೆಯೇನೂ ಆಗದೇ ಇದ್ದರೂ, ನನ್ನ ಮಟ್ಟಿಗೆ ಅದು ಬಹಳ ಅಮೂಲ್ಯ ಮತ್ತು ಅದರಿಂದ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದ ನೆಮ್ಮದಿ ಸಿಗುತ್ತಿತ್ತು.
ಈ ಎಲ್ಲಾ ಯೋಚನೆಗಳಿಗೆ, ನಾನು ಮತ್ತು ನನ್ನ ಹಲವು ಮಿತ್ರರು ಸೇರಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ, ಕಳೆದ ೧೭-೦೪-೨೦೧೦ ರಂದು ಮುನ್ನುಡಿಯನ್ನು ಬರೆದಿದ್ದೇವೆ. ನಮ್ಮ ಘನೋದ್ದೇಶಗಳಿಗಾಗಿ ನಮ್ಮೆಲ್ಲರನ್ನೂ ಒಟ್ಟಿಗೆ ಸೇರಿಸುತ್ತಿರುವ ಸಂಸ್ಥೆಯ ಹೆಸರು
"ಸಂವಿತ್ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರತಿಷ್ಠಾನ (ರಿ)"
ಇದು ನಮ್ಮ ನಿಮ್ಮೆಲ್ಲರ ಸಂಸ್ಥೆ, ಉತ್ತಮ ಉದ್ದೇಶಗಳಿಗಾಗಿ ಎಲ್ಲರನ್ನೂ ಒಟ್ಟಾಗಿ ಸೇರಿಸುವಂತಹ ನೆಲೆ. ಈ ಸೂರಿನಡಿಯಲ್ಲಿ ಕೆಲಸಮಾಡಲು ತಾವೆಲ್ಲಾ ಆಸಕ್ತಿ ತೋರಿಸುವಿರೆಂದು ನನ್ನ ಭಾವನೆ. ಇಂಥಹ ಸಂಸ್ಥೆಯನ್ನು ಕಾನೂನಿನ ಚೌಕಟ್ಟಿನೊಳಗೆ ತರಲು ಇದರ ನೋಂದಣಿಯನ್ನೂ ಮಾಡಲಾಗಿದೆ. ಜೊತೆಯಲ್ಲಿ ಆದಾಯಕರ ವಿನಾಯತಿಯನ್ನು ದಾನಿಗಳಿಗೆ ಕೊಡಮಾಡುವ ಸಲುವಾಗಿ ಆದಾಯಕರ ಇಲಾಖೆಯ ನಾನೂನಿನನ್ವಯ 80G ನೋಂದಣಿಯನ್ನೂ ಮಾಡಲಾಗುವದು.
ನಮ್ಮ ಕನಸುಗಳು:
1. ಬಡ ಪ್ರತಿಭಾವಂತ ಮಕ್ಕಳಿಗೆ ಸಹಾಯಧನ ನೀಡುವುದು, ಈ ಉದ್ದೇಶಕ್ಕಾಗಿ ಪ್ರತೀವರ್ಷವೂ ತಾಲೂಕಿನಾಧ್ಯಂತ ಪ್ರತಿಭಾನ್ವೇಷಣೆಯನ್ನು ಮಾಡುವುದು.
2. ಬಡ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸುವುದು.
3. ಹೆಚ್ಚಿನ ವ್ಯಾಸಂಗ ಮಾಡಬಯಸುವ ಮಕ್ಕಳಿಗೆ ಆನಿಟ್ಟಿನಲ್ಲಿ ಮಾರ್ಗದರ್ಶನ ವನ್ನು ಸಂಪನ್ಮೂಲ ವ್ಯಕ್ತಿಗಳಿಂದ ಮಾಡಿಸುವುದು.
4. ನಮ್ಮ ಪಟ್ಟಣದಲ್ಲಿ ಸುಸಜ್ಜಿತವಾದ ಮತ್ತು ಎಲ್ಲಾ ಆಸಕ್ತ ಓದುಗರಿಗೆ ಅನೂಕೂಲವಾಗುವಂತಹ ಗ್ರಂಥಾಲಯದ ನಿರ್ಮಾಣ.
5. ನಮ್ಮ ಅತೀ ದೊಡ್ಡ ಕನಸೆಂದರೆ, ಆಳ್ವಾಸ್ ಶೈಕಣಿಕ ಸಂಸ್ಥೆಯ ರೀತಿಯಲ್ಲೇ ಯಲ್ಲಾಪುರದಲ್ಲಿ ಅಂಥಹ ಒಂದು ಶಿಕ್ಷಣ ಸಂಸ್ಥೆಯನ್ನು ಭವಿಷ್ಯದಲ್ಲಿ ಕಟ್ಟುವುದು.
6. ಅನಾಥ ಮಕ್ಕಳಿಗಾಗಿ ಸಮ್ಮ ಭಾಗದಲ್ಲಿ ಅನಾಥಾಲಯವನ್ನು ನಿರ್ಮಾಣ ಮಾಡುವುದು.
7. ನಮ್ಮ ನಾಡು, ನುಡಿ, ಸಂಸ್ಕೃತಿಯ ಏಳ್ಗೆಗಾಗಿ, ನಿಯಮಿತವಾಗಿ ಅಂತಹ ಸಾಂಕೃತಿಕ ಸಮಾರಂಭಗಳನ್ನು ನಡೆಸುವುದು. ಅಂಥಹ ಸಮಾರಂಭಗಳು ನಾಡಿನ ಹೆಮ್ಮೆಯ ಗರಿಮೆಗಾಳಾಗಿರಬೇಕೆನ್ನುವುದು ನಮ್ಮ ಅಪೇಕ್ಷೆ.
ಇಂತಹ ನೂರೊಂದು ಕನಸುಗಳನ್ನು ಹೊತ್ತು ನಾವು ಈ ಸಂಸ್ಥೆಯನ್ನು ಹುಟ್ಟುಹಾಕಿದ್ದೇವೆ. ನಮ್ಮ ಭಾಗದ ಜನ, ನೆಲ, ಜಲ, ಪರಿಸರ, ಸಂಸ್ಕೃತಿಯ ಏಳ್ಗೆಗಾಗಿ ದುಡಿಯಬೇಕೆನ್ನುವ ನಿಮ್ಮೆಲ್ಲರ ಅಪೇಕ್ಷೆ, ಈ ಸಂಸ್ಥೆಯ ಮೂಲಕ ಸಾಕಾರಗೊಳ್ಳಲಿ ಎನ್ನುವುದು ನಮ್ಮ ಬಿನ್ನಹ.
ನಮ್ಮೆಲ್ಲರ ಅಂತಿಮ ಗುರಿ, ನಾವು ಮಾಡಿದ ಸಹಾಯಗಳು ಹೆಚ್ಚು ಸೂಕ್ತ ವ್ಯಕ್ತಿಗಳಿಗೆ ತಲುಪಬೇಕು, ಆಮೂಲಕ ಕಷ್ಟದಲ್ಲಿ ಇರುವವರಿಗೆ ಅದರಿಂದ ಪ್ರಯೋಜನವಾಗಬೇಕು. ಆ ಕಾರಣಕ್ಕಾಗಿ ಮೂರು ರೀತಿಯಲ್ಲಿ ಧನಸಂಗ್ರಹದ ಗುರಿಯನ್ನು ನಾವು ಇಟ್ಟುಕೊಂಡಿದ್ದೇವೆ.
ಅವುಗಳೆಂದರೆ:
1. ಸಹಾಯಧನಕ್ಕಾಗಿ ವಾರ್ಷಿಕವಾಗಿ ದತ್ತಿನಿಧಿ ಸಂಗ್ರಹಣೆ.( ಪ್ರತಿವರ್ಷವೂ ಬಡ ಪ್ರತಿಭಾವಂತ ಮಕ್ಕಳಿಗೆ ಸಹಾಯಧನ ನೀಡುವವರಿಗಾಗಿ )
2. ಸಂಸ್ಥೆಯ ಮೂಲನಿಧಿ ಸಂಗ್ರಹಣೆ. ( ಪ್ರತಿಷ್ಠಾನದ ಮೂಲ ನಿಧಿಗಾಗಿ ಧನ ಸಹಾಯ ಮಾಡುವವರಿಗಾಗಿ)
3. ಸರಕಾರ ಮತ್ತು ಇತರ ಸಂಸ್ಥೆಗಳಿಂದ ಸಹಾಯ. ( ಸರಕಾರ ಮತ್ತು ಸರಕಾರೇತರ ಸಂಸ್ಥೆಗಳಿಂದ ದೊರೆಯಬಹುದಾದ ಅನುದಾನ)
ಆದ್ದರಿಂದ ಹಿರಿಯರ ಒಂದು ಮಾತಿದೆ " ಎಲ್ಲಾ ಮಹತ್ಕಾರ್ಯಗಳು ಸಾಧಿತವಾಗಿದ್ದು, ಚಿಕ್ಕಚಿಕ್ಕ ಕನಸುಗಳಿರುವ ದೊಡ್ಡ ವ್ಯಕ್ತಿಗಳಿಂದ ಅಲ್ಲ, ಬದಲಾಗಿ ಅದು ಸಾಧ್ಯವಾಗಿರುವದು ದೊಡ್ಡದೊಡ್ಡ ಕನಸುಗಳಿರುವ ಚಿಕ್ಕ ವ್ಯಕ್ತಿಗಳಿಂದ ಮಾತ್ರ". ಹಾಗಾಗಿ ನಾವೆಲ್ಲಾ ಚಿಕ್ಕ ವ್ಯಕ್ತಿಗಳು ಸೇರಿ ತಳೆದಂತ ಈ ಕನಸುಗಳ ಸಾಕಾರಕ್ಕಾಗಿ ನಿಮ್ಮೆಲ್ಲರ ಸಹಕಾರ ಅತ್ಯವಶ್ಯ. ಈ ಕಾರ್ಯದಲ್ಲಿ ನೀವು ನಮ್ಮ ಬಗ್ಗೆ ತೋರುವ ವಿಶ್ವಾಸ, ಆಸಕ್ತಿಯೇ ನಮಗೆ ಶ್ರೀರಕ್ಷೆ. ನಿಮ್ಮ ಅಮೂಲ್ಯ ಸಲಹೆಯ ಜೊತೆಗೆ ಧನಸಹಾಯವನ್ನೂ ಮಾಡಿ ಪ್ರೋತ್ಸಾಹಿಸಿ.
ಕನಸುಗಳು ನಿಮ್ಮಿಂದ ಸಾಕಾರಗೊಳ್ಳಲಿ,
ನಿಮ್ಮವನಾದ,
ಶ್ರೀಪತಿ ಭಟ್.
ಕಾರ್ಯದರ್ಶಿ
ಸಂವಿತ್ ಪ್ರತಿಷ್ಠಾನ (ರಿ)
ಈ ವಿಷಯಗಳಿಗಾಗಿ ನಮ್ಮನ್ನು ಸಂಪರ್ಕಿಸಬೇಕಾದ ವಿಳಾಸ:
ಸಂವಿತ್ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರತಿಷ್ಠಾನ (ರಿ)
ಕೆ ಬಿ ರಸ್ತೆ, ಯಲ್ಲಾಪುರ- 581 359 ( ಉತ್ತರ ಕನ್ನಡ)
ಪೋನ್ ಸಂಖ್ಯೆ: (08419)261049
ಮೊಬೈಲ್: 9900770650 (ಶ್ರೀಪತಿ ಭಟ್) ಈ ಮೇಲ್ ವಿಳಾಸ: bhat.shripati@gmail.com
KNOWING AND BELIEVING
There is a huge difference between "knowing" and "believing". In philosophy, we always say "Know yourself". Th...