ನನಗೆ ಬುದ್ಧಿ ತಿಳಿದಾಗಿನಿಂದಲೂ ಕಾಡುವುದು ಒಂದೇ ಪ್ರಶ್ನೆ, ಮಾವಿನಮರಕ್ಕೆ ಯಾವಾಗಲೂ ಮಾವಿನ ಹಣ್ಣೇ ಏಕಾಗಬೇಕು, ಅಂಥದೇ ಜಾತಿಯ ಹಣ್ನೇ ಏಕಾಗಬೇಕು ಬೇರೆಯದು ಏಕಾಗಬಾರದು? ಬಹುಷಃ ನಿಮ್ಮಲ್ಲಿ ಬಹಳಷ್ಟು ಮಂದಿಗೆ ಇಂಥಹ ವಿಲಕ್ಷಣ ಪ್ರಶ್ನೆ ಬಂದಿರಬಹುದು. ಇದಕ್ಕೆ ಇದೊಂದೇ ಉದಾಹರಣೆಯಲ್ಲ, ಇಂಥದ್ದೇ ಎಷ್ಟೋ ಇದೆ. ಹಾಗಾದಲ್ಲಿ ಪ್ರಕೃತಿಯ ಈ ಸಹಜತೆಗೆ ಕಾರಣವೇನು? ಇದಕ್ಕೆ ವೈಜ್ನಾನಿಕ ಕಾರಣ ಹುಡುಕುತ್ತಾ ಕೂರುವುದು ನನಗೆ ಇಷ್ಟವಿಲ್ಲ, ಪ್ರತಿಯೊಂದು ಕ್ರಿಯೆಗೂ ಒಂದು ಪೂರಕ ಶಕ್ತಿಯಿದೆ, ಅದರಿಂದ ಈ ಕ್ರಿಯೆಗಳೆಲ್ಲಾ ಅರಿವಿಲ್ಲೆದಂತೇ ನಡೆದುಕೊಂಡು ಹೋಗುತ್ತಿವೆ.
ಆದರೆ ನನ್ನ ಪ್ರಶ್ನೆ, ಪ್ರಕೃತಿಯ ಈ ಸಹಜತೆ ನಮಗೆ ಕೊಡುತ್ತಿರುವ ಪಾಠ ಏನು ಎನ್ನುವುದು. ನಮ್ಮ ಇಂದಿನ ವೈಜ್ನಾನಿಕ ಅನ್ವೇಷಣೆಗಳು, ಹೊಸತನ್ನು ಹುಡುಕುವ ಹಂಬಲ, ಆಮೂಲಕ ನಾವು ಪ್ರಕೃತಿಯೊಂದಿಗೆ ಕಳೆದುಕೊಳ್ಳುತ್ತಿರುವ ತಾದಾತ್ಮ್ಯತೆ, ಇವೆಲ್ಲಾ ತುಂಬಾ ವಿರೋಧಾಭಾಸವಾಗಿ ಕಾಣುತ್ತಿದೆಯಲ್ಲವೇ? ನಮ್ಮ ಹೊಸತು ಹುಡುಕುವ ಹಂಬಲಕ್ಕೆ ಈ ಸಹಜತೆಯ ಹೊಳಪು ಇರಲಿ ಎಂಬುದು ಆಶಯ
No comments:
Post a Comment