ಪೂಜನೀಯ ಸ್ಥಳಗಳೋ, ಶ್ರದ್ಧಾಕೇಂದ್ರಗಳೋ ಅವು ಯಾವುದೇ ಆಗಿರಬಹುದು, ಅಲ್ಲಿಗೆ ಹೋಗುವ ಮೊದಲು ನಮ್ಮ ಮನಸ್ಸಿನಲ್ಲಿ ಯಾವುದೋ ತೆರನಾದ ಚೈತನ್ಯಶೀಲ ಕಲ್ಪನೆಗಳನ್ನು ಹೊತ್ತು ಹೋಗುತ್ತೇವೆ. ಅಲ್ಲಿಂದ ತಿರುಗಿ ಬರುವಾಗ ಮನಸ್ಸಿನ ತುಂಬಾ ನಿರಾಸೆ. ಇದೆಲ್ಲಕ್ಕೆ ಕಾರಣ ಅಲ್ಲಿಯ ಕಲುಷಿತ ವಾತಾವರಣ.
ಸಾಮಾಜಿಕ ಸಾಮರಸ್ಯಕ್ಕೆ, ಜನಮಾನಸದ ಔನ್ನತ್ಯಕ್ಕೆ ಇಂತಹ ಕೇಂದ್ರಗಳು ಕಾರಣವಾಗಬೇಕು. ಆದರೆ ಅದರ ಫಲಶ್ರುತಿಯೇ ಬೇರೆ ಆಗುತ್ತಿದೆ. ಯಾವುದೇ ಒಂದು ಸಮಾಜ ಹಿತ ಕಾರ್ಯ ಆಗಬೇಕಾದಾಗ ಅದಕ್ಕೆ ಕಾರಣಕರ್ತೃ ಸಮಾಜ, ಅದರ ಸಹಮತಿ. ಒಪ್ಪಿಕೊಂಡ ತತ್ವದ ಜೊತಯಲ್ಲಿ ಇನ್ನೊಂದನ್ನು ಸೇರಿಸುವುದು ಸುಲಭ, ಅದು ಸಮಷ್ಠಿಯಾಗಿರಬೇಕಷ್ಠೇ. ತತ್ವ ಸಿದ್ಧಾಂತಕ್ಕೆ ಬದ್ಧರಾದ ವ್ಯಕ್ತಿಗಳ ಸಾಮಿಪ್ಯ ಸಿಗುವುದು ಇಂತಹ ಕೇಂದ್ರಗಳ ಮೂಲಕ ಮಾತ್ರ. ಅದು ಸಮಷ್ಠಿಯಾಗಿರಬೇಕಷ್ಟೇ.
No comments:
Post a Comment