Wednesday, May 26, 2010

ವ್ಯವಸ್ಥೆಗಳೇಕೆ ಪತನಹೊಂದುತ್ತಿವೆ?

ನಮ್ಮ ಹಳೆಯ ತಲೆಮಾರಿನ ಸಾಂಸ್ಕೃತಿಕ ಶೈಕ್ಷಣಿಕ ಕೇಂದ್ರಗಳಲ್ಲಿಯ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಎಲ್ಲರ ಮನಸ್ಸಿನಲ್ಲೂ ಬಂದುಹೋಗುವ ಪ್ರಶ್ನೆ ಇದು. ಅದರ ಸ್ಥಾಪಕರು ಯಾವ ಉದ್ದೇಶದಿಂದ ಸಂಸ್ಥೆಯನ್ನೋ, ಸಾಂಸ್ಕೃತಿಕ ಕೇಂದ್ರವನ್ನೋ ಕಟ್ಟಿದರೋ, ಅದಕ್ಕೆ ವ್ಯತಿರಿಕ್ತವಾಗಿ ಅಲ್ಲಿನ ವಾತವರಣ ಕಲುಷಿತವಾಗುತ್ತಿದೆ. ನಾನು ಯಾವುದೇ ಒಂದು ಸಂಸ್ಥೆಯನ್ನು ಬೊಟ್ಟುಮಾಡಿ ಹೇಳುತ್ತಿಲ್ಲ, ನಮ್ಮ ವ್ಯವಸ್ಥೆಯಲ್ಲಿ ಕಾಣುತ್ತಿರುವ ಒಟ್ಟಭಿಪ್ರಾಯ ಇದು.

ಪೂಜನೀಯ ಸ್ಥಳಗಳೋ, ಶ್ರದ್ಧಾಕೇಂದ್ರಗಳೋ ಅವು ಯಾವುದೇ ಆಗಿರಬಹುದು, ಅಲ್ಲಿಗೆ ಹೋಗುವ ಮೊದಲು ನಮ್ಮ ಮನಸ್ಸಿನಲ್ಲಿ ಯಾವುದೋ ತೆರನಾದ ಚೈತನ್ಯಶೀಲ ಕಲ್ಪನೆಗಳನ್ನು ಹೊತ್ತು ಹೋಗುತ್ತೇವೆ. ಅಲ್ಲಿಂದ ತಿರುಗಿ ಬರುವಾಗ ಮನಸ್ಸಿನ ತುಂಬಾ ನಿರಾಸೆ. ಇದೆಲ್ಲಕ್ಕೆ ಕಾರಣ ಅಲ್ಲಿಯ ಕಲುಷಿತ ವಾತಾವರಣ.

ಸಾಮಾಜಿಕ ಸಾಮರಸ್ಯಕ್ಕೆ, ಜನಮಾನಸದ ಔನ್ನತ್ಯಕ್ಕೆ ಇಂತಹ ಕೇಂದ್ರಗಳು ಕಾರಣವಾಗಬೇಕು. ಆದರೆ ಅದರ ಫಲಶ್ರುತಿಯೇ ಬೇರೆ ಆಗುತ್ತಿದೆ. ಯಾವುದೇ ಒಂದು ಸಮಾಜ ಹಿತ ಕಾರ್ಯ ಆಗಬೇಕಾದಾಗ ಅದಕ್ಕೆ ಕಾರಣಕರ್ತೃ ಸಮಾಜ, ಅದರ ಸಹಮತಿ. ಒಪ್ಪಿಕೊಂಡ ತತ್ವದ ಜೊತಯಲ್ಲಿ ಇನ್ನೊಂದನ್ನು ಸೇರಿಸುವುದು ಸುಲಭ, ಅದು ಸಮಷ್ಠಿಯಾಗಿರಬೇಕಷ್ಠೇ. ತತ್ವ ಸಿದ್ಧಾಂತಕ್ಕೆ ಬದ್ಧರಾದ ವ್ಯಕ್ತಿಗಳ ಸಾಮಿಪ್ಯ ಸಿಗುವುದು ಇಂತಹ ಕೇಂದ್ರಗಳ ಮೂಲಕ ಮಾತ್ರ. ಅದು ಸಮಷ್ಠಿಯಾಗಿರಬೇಕಷ್ಟೇ.

No comments:

Post a Comment

KNOWING AND BELIEVING

There is a huge difference between "knowing" and "believing". In philosophy, we always say "Know yourself". Th...